ಬುಧವಾರ, ಡಿಸೆಂಬರ್ 15, 2010

ಒಗ್ಗರಣೆಯ ಮನೆಯೊಳಗೆ ಘಮ ಘಮವೆನುವ ಕಷಾಯ...

ಈ ಯೋಚನೆ ಇಂದು, ನಿನ್ನೆಯದಲ್ಲ. ದಟ್ಸ್‌ಕನ್ನಡದಲ್ಲಿ ನಾನು ಬರೆಯುತ್ತಿದ್ದ "ಶಿರಸಿ ಭವನ" ಅಂಕಣದ ಕಾಲದಿಂದಲೂ ಇತ್ತು. ಈಗ ಅದು ಕಾರ್ಯರೂಪಕ್ಕೆ ಬಂದಿದೆಯಷ್ಟೇ. ಹೌದು... ಇನ್ನು ರುಚಿ ರುಚಿ ಪದಾರ್ಥಗಳು, ತಿಂಡಿ ತಿನಸುಗಳು ನನ್ನ ಒಗ್ಗರಣೆ ಬ್ಲಾಗ್ ಮನೆಯಲ್ಲಿ ತಯಾರಿಸಲ್ಪಡುತ್ತವೆ. ಅಡುಗೆ ಆಸಕ್ತರು ಅದರಲ್ಲಿರುವ ತಿಂಡಿ ತಿನಸನ್ನು ಓದಿ, ಮಾಡಿ, ಸವಿದರೆ ನನಗಷ್ಟೇ ಸಾಕು. ಈ ಒಗ್ಗರಣೆ ಮನೆಯ ವಿಶೇಷವೇನೆಂದರೆ ಇದರಲ್ಲಿ ಹೆಚ್ಚಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿರಸಿ ಕಡೆಯ ತಿನಸುಗಳನ್ನೇ ಹೆಚ್ಚಾಗಿ ತಯಾರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕಡಿಮೆ ತೆಂಗು, ಎಣ್ಣೆ ಕಾಗೂ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸುವ ಪದಾರ್ಥಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕಾರಣ ಒಗ್ಗರಣೆ ಮನೆಯೊಡತಿಯ ಪ್ರಕಾರ "ಆರೋಗ್ಯವೇ ಭಾಗ್ಯ" :)

ನನ್ನ ಒಗ್ಗರಣೆಗೆ ನಿಮ್ಮ ಒಗ್ಗರಣೆಯನ್ನೂ ಹಾಕಿ ಮತ್ತಷ್ಟು ರುಚಿಕರ ಮಾಡಬಹುದು. ನಿಮ್ಮ ಸಲಹೆ ಸೂಚನೆಗಳೇನಿದ್ದರೂ ಸದಾ ಸ್ವಾಗತ. ಆಸಕ್ತರು ತಮ್ಮ ಪಾಕಶಾಸ್ತ್ರವನ್ನೂ ನನಗೆ ಕಳುಹಿಸಿದಲ್ಲಿ ಅವರ ಹೆಸರಿನಲ್ಲಿಯೇ ಅದನ್ನು ಪ್ರಕಟಿಸಲಾಗುವುದು. ಮುಖ್ಯವಾಗಿ ರುಚಿಕರ ಹಾಗೂ ಆರೋಗ್ಯಕರ ತಿನಿಸಿನ ವಿಧಾನವನ್ನು ಹೆಚ್ಚಿನವರಿಗೆ ತಿಳಿಸುವುದೇ ಇದರ ಉದ್ದೇಶ. ಸದ್ಯಕ್ಕೆ ವಾರಕ್ಕೊಮ್ಮೆ ಈ ಅಡಿಗೆ ಮನೆಯಲ್ಲಿ ಹೊಸ ಬಗೆಯ ಅಡಿಗೆ ತಯಾರಿಯನ್ನು ಹಾಕಬೇಕೆಂದಿರುವೆ. 

ಚುಮು ಚುಮು ಚಳಿಗಾಳಿ ಬೀಸತೊಡಗಿದೆ. ರಗ್ಗಿನೊಳಗೆ ಮತ್ತಷ್ಟು ಹೊತ್ತು ಹುದುಗಿ ಮಲಗುವ ಆಸೆ ಯಾರನ್ನೂ ಹೊರ ಬಿಡುತ್ತಿಲ್ಲ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು! ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ನಮಗಿದೆ. ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ ಹೊದ್ದು ಮಲಗುವ ಸಮಯವೇ ಆಗಿರಲಿ... ಕಷಾಯ ನಮ್ಮ ಹಸಿವನ್ನು ತಣಿಸದು, ನಿದ್ದೆಯನ್ನು ಆರಿಸದು. ಬದಲಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಸುಖಕರವಾದ ನಿದ್ದೆಗೆ ಪ್ರೇರೇಪಿಸುವುದು. ಇಂತಹ ಕಷಾಯವನ್ನು ತಯಾರಿಸಲು ನಿಮಗೆ ತಗಲುವ ಸಮಯ ಕೇವಲ ೨-೩ ನಿಮಿಷ! ಆದರೆ ಮೊದಲು ಕಷಾಯದ ಹುಡಿಯನ್ನು ಮಾಡಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಇದನ್ನು ತಯಾರಿಸಲು ತಗಲುವುದು ಕೇವಲ ೧೦-೧೫ ನಿಮಿಷ. ಹೀಗೆ ತಯಾರಿಸಿಟ್ಟು ಕೊಂಡ ಹುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳುಗಟ್ಟಲೆ ಬರುವುದು. ಈ ಪುಡಿಯನ್ನು ಉಪಯೋಗಿಸಿಯೇ ಕಷಾಯದ ಪೇಯವನ್ನು ತಯಾರಿಸುವುದು.

ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ - 

ಹೆಚ್ಚಿನ ಓದಿಗೆ ಇನ್ನು ಒಗ್ಗರಣೆಯ ಮನೆಗೆ ಪ್ರವೇಶಿಸಿ.... :)

ಒಗ್ಗರಣೆ ಮನೆಯನ್ನು ಮಾನಸದಷ್ಟೇ ಆತ್ಮೀಯತೆಯಿಂದ ಸ್ವೀಕರಿಸಿ, ಇದರ ಪಾಕ ಪಾಠ ಶಾಲೆಯ ಸಹೋದ್ಯೋಗಿಗಳು/ವಿದ್ಯಾರ್ಥಿಗಳು/ಸಲಹೆಗಾರರು ಆಗಿ ಸೇರಿಕೊಳ್ಳುತ್ತೀರೆಂದು ಆಶಿಸುತ್ತೇನೆ....:)

-ತೇಜಸ್ವಿನಿ ಹೆಗಡೆ.

5 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

oggarane ankanakke naavu athiti barahagaararaagutteve aythaa...

ಚಿತ್ರಾ ಹೇಳಿದರು...

ತೇಜು,
ಒಳ್ಳೆ ಕೆಲಸ ಮಾಡಿದೆ ನೀನು.
ಒಗ್ಗರಣೆಯ ಘಮ ಘಮ ಈಗಲೇ ಮೂಗಲ್ಲಿ ತುಂಬ್ತಾ ಇದ್ದು . ........ ಬ್ಲಾಗಲೋಕವಿಡೀ ಪರಿಮಳ ತುಂಬಲಿ .

ಸಾಗರದಾಚೆಯ ಇಂಚರ ಹೇಳಿದರು...

Oggarane gham gham da blog ge shubhavaagali

AntharangadaMaathugalu ಹೇಳಿದರು...

ತಂಗೀ...
ಒಳ್ಳೇ ವಿಚಾರ. ದಕ್ಷಿಣ ಕನ್ನಡ, ಉಡುಪಿ, ಶಿರಸಿ ಕಡೆಯ ಅಡಿಗೆಗಳನ್ನು ನಾವೂ ತಯಾರಿಸಿ ಸವಿಯಬಹುದು. ಶುಭವಾಗಲಿ..

ಶ್ಯಾಮಲ

ಸುಧೇಶ್ ಶೆಟ್ಟಿ ಹೇಳಿದರು...

naanu vidhyaarthi :) thumba thanks e blog start maadiddake :) nammantha vidyaarthigaLige thumba sahaayakavaaguttade...