ಅಲ್ಪವಿರಾಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಲ್ಪವಿರಾಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 1, 2010

ಶಕ್ತಿಯ ಕೊಡು ಹೇ ಪ್ರಭು...

ನಿನಗೆ ಉತ್ತಮರೆಂದರೆ ಬಲು ಇಷ್ಟವಂತೆ
ನಾಲ್ಕು ಮಂದಿಗೆ ಅನ್ನ ಹಾಕುವವರು,
ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವವರು,
ಸದಾ ಹಸನ್ಮುಖಿಗಳು, ಮೃದು ಮಾತುಗಾರರು,
ಅನ್ಯಾಯ ಬಗೆಯದವರು, ಅಕ್ರಮ ಸಹಿಸದವರು,
ನಿನ್ನ ನಾಮವ ಜಪಿಸುತ, ನಿನ್ನ ನಂಬಿದವರು,
ಇಂಥವರೇ ನಿನಗೆ ಬಲು ಇಷ್ಟವಂತೆ....

ಆದರೆ...

ನಿನಗಿಂತಲೂ ಪ್ರೀತಿಸುವ, ಅವರ ಸ್ವಂತದವರು
ನಿನಗೇಕೆ ಕಾಣಲಿಲ್ಲವೋ? ನೀ ಸ್ವಾರ್ಥಿಯೋ?!
ಕರುಣಾಳು ಬಾ ಬೆಳಕೆ... ಎಂದು
ಸದಾ ನಿನ್ನ ಕರೆಯಬೇಕೆಂದಿದ್ದರೆ ಹೇಳು..
ನಿನ್ನಿಷ್ಟದವರ ಬಾಯಿಂದಲೇ
ಒಂದೇನು! ನೂರು ಬಾರಿ ಹೇಳಿಸಿಯೇನು....

ಆದರೆ....

ದಯಮಾಡಿ ಕೊಟ್ಟುಬಿಡು ಮತ್ತೆ
ಅವರ ಸ್ವತ್ತ ಅವರಿಗೆ ನೀ ಹೇ ದೇವ
ನಿನ್ನಿಷ್ಟದ ಆತ್ಮ ಅವರ ಅಂತರಾತ್ಮವೂ ಹೌದು
ಕಸಿದುಕೊಂಡು ನೀ ಏನು ಪಡಿದೀಯೇ?
ಕೊಟ್ಟು ಬಿಡು ನಿಜ ಧೈರ್ಯ-ಸ್ಥೈರ್ಯವ
ಬಾಳಬೇಕಿದೆ ಉಳಿದು ಹೋದವರು,
ನಿನ್ನ ಮೇಲಿರುವ ನಂಬಿಕೆಗಾಗಿ....

[ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀರಿ ಹೋದ ನನ್ನ ಆತ್ಮೀಯ, ಅತ್ಯಂತ ಆಪ್ತ ಹಾಗೂ ಪ್ರೀತಿಯ ಚಿಕ್ಕಪ್ಪ ಜಿ.ಎನ್.ಭಟ್(ನನ್ನ ತಂದೆಯವರ ಕಿರಿಯ ತಮ್ಮ) ಅವರಿಗಾಗಿ ಅರ್ಪಿತ ಈ ಕವನ...:( ಸಾವು ಅನಿವಾರ್ಯ, ಆದರೆ ದುರ್ಮರಣ ಅನ್ಯಾಯ...ಅದರ ನೋವೂ ಅಷ್ಟೇ ತೀವ್ರ ಹಾಗೂ ನಿರಂತರ.....:( ]

-ತೇಜಸ್ವಿನಿ ಹೆಗಡೆ.

ಗುರುವಾರ, ಮಾರ್ಚ್ 26, 2009

ಯುಗಾದಿಯ ಸಂಭ್ರಮದ ಜೊತೆಗೆ ಮಾನಸವು ಪಡೆಯುತಿದೆ ಅಲ್ಪವಿರಾಮ,

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.



ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.




ನಿಮ್ಮೆಲ್ಲರ ಬಾಳಲ್ಲಿ ಹೊಸ ವರುಷವು ಹೊಸ ಹರುಷವ ಹೊಸತು ಹೊಸತು ತರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತಿದೆ ನನ್ನ ಮಾನಸ.




ಹಾಗೆಯೇ ಮಾನಸವೂ ಮರೆಯಾಗುತ್ತಿದೆ ಅಲ್ಪ ಕಾಲಕ್ಕೆ. ಬಹು ಬೇಗ ಹಿಂತಿರುಗುವ ಆಶಾವಾದದೊಂದಿಗೆ ಪಡೆಯಹೊರಟಿದೆ ಅಲ್ಪವಿರಾಮ,

ಅಲ್ಲಿಯವರೆಗೆ ಸದಾ ಹಸಿರಾಗಿರುವಿರಿ ನೀವೆಲ್ಲಾ ನನ್ನ ಮಾನಸದಲ್ಲಿ ಸವಿ ನೆನಪಾಗಿ.

ಶುಭಾಶಯಗಳೊಂದಿಗೆ,
ತೇಜಸ್ವಿನಿ ಹೆಗಡೆ.