ನೀ ತೋರಿದ್ದು ಸಾಗರವನ್ನೇಆದರೆ ನಾ ಕಂಡಿದ್ದು,
ಅಡಗಿರುವ ಮುತ್ತು ಹವಳಗಳನ್ನ
ನೀ ಕಾಣಿಸಿದ್ದು ನೀಲಾಗಸವನ್ನೇ
ಆದರೆ ನಾ ಬಯಸಿದ್ದು,
ಸಪ್ತವರ್ಣಗಳ ಮಳೆಬಿಲ್ಲನ್ನ
ನೀ ನೀಡಿದ್ದು ಚೆಂಗುಲಾಬಿಯನ್ನೇ
ಆದರೆ ನಾ ಎಣಿಸಿದ್ದು,
ಘಮ್ಮೆನ್ನುವ ಜಾಜಿ ಮೊಗ್ಗುಗಳನ್ನ
ಪಡೆದದ್ದೇನೂ ಕಡಿಮೆಯದ್ದಲ್ಲ..
ಆದರೆ ಬಯಸಿದ್ದೂ ಕೈಗೆಟುಕದ್ದಲ್ಲ!
ತಪ್ಪು ನನ್ನದಲ್ಲ ನಲ್ಲ,
ಈ ನನ್ನ ಹುಚ್ಚು ಮನಸಿನದು....
ರವಿ ಕಾಣದ್ದು ಕವಿ ಕಂಡಂತೇ
ಕಂಡಿದ್ದು ಕಾಣದ್ದು, ಇದ್ದದ್ದು ಇಲ್ಲದ್ದು,
ಎಲ್ಲವನೂ ಬಯಸಿ,
ನಿದ್ದೆಗೆಡಿಸುತಿದೆ ನಿನ್ನ ನಲ್ಲೆಯ!
- ತೇಜಸ್ವಿನಿ
(ಚಿತ್ರ ಕೃಪೆ : ಗೂಗಲ್)
ಹುಚ್ಚು ಮನಸಿನ ತಪ್ಪುಗಳನ್ನ ಚೆನ್ನಾಗಿ ಪದವಾಗಿಸಿದ್ದೀರ....
ಪ್ರತ್ಯುತ್ತರಅಳಿಸುಭಾವ ತುಂಬೆದ ಸಾಲುಗಳು...
ಕೊನೆಯಲ್ಲಿನ ಸಾಲು ಬಹಳ ಇಷ್ಟವಾಯಿತು. ತಪ್ಪು ಯಾರದ್ದೂ ಅಲ್ಲ, ಇಲ್ಲಿ. ಏಕೆಂದರೆ, ಅವರವರ ಭಾವಕ್ಕೆ ತಕ್ಕಂತೆ....
ಪ್ರತ್ಯುತ್ತರಅಳಿಸುಚೆನ್ನಾಗಿದೆ.
ಏನು ಸಿಕ್ಕರೂ ಸಹ, ಮನದ ಬಯಕೆ ಬೇರೆಯೇ ಆಗಿರುವದೇ!
ಪ್ರತ್ಯುತ್ತರಅಳಿಸುಕವನ ತುಂಬ ಚೆನ್ನಾಗಿದೆ.
ತೇಜೂ,
ಪ್ರತ್ಯುತ್ತರಅಳಿಸುಚಂದ ಇದ್ದು ! ನಲ್ಲ ತಂದದ್ದನ್ನು ನಲ್ಲೆ ಕಂಡ ಬಗೆಯೇ ಬೇರೆ ! ಅದು ಯಾವಾಗಲೂ ಹಾಗೇ ಅಲ್ಲವೇ? ನೋಟ ಬೇರೆ ಬೇರೆ ಯಾದರೂ ಅದರೊಳಗಿನ ಪ್ರೀತಿ ಒಂದೇ .
ಇಷ್ಟವಾಯ್ತು !
ಭಾವಪೂರ್ಣ ಕವನ, ಚೆನ್ನಾಗಿದೆ
ಪ್ರತ್ಯುತ್ತರಅಳಿಸುಸಾಗರ ಮುತ್ತು ಹೊ೦ದಿದ್ದರು ಅದನ್ನು ಪಡೆಯುವದು ಸುಲಭವಲ್ಲ. ಮುತ್ತು ಬೇಡಿದವರಿಗೆ ಸಾಗರ ತ೦ದು ಕೊಟ್ಟರೇ?
ಪ್ರತ್ಯುತ್ತರಅಳಿಸುಆಕಾಶ್ ಕಾಮನಬಿಲ್ಲು ಹೊ೦ದಿದ್ದರೂ ಅದರ ನೋಟ ಸರ್ವಕಾಲ ಸಾಧ್ಯವೇ? ಕಾಮನಬಿಲ್ಲಿಗಾಗಿ ಪರಿತಪಿಸಿದವರಿಗೆ ನೀಲಾಕಾಶ ತ೦ದು ಕೊಟ್ಟರೇ?
ಸಣ್ಣ ಸಣ್ಣ ಬೇಡಿಕೆಗಳಿದ್ದರೂ ಅವುಗಳ ಪಡೆವಿಕೆ ಅಪರೂಪ ಆದರೇ ನೈಸರ್ಗಿಕ ಮತ್ತು ತ೦ದು ಕೊಡುವವರಿಗೆ ಕಷ್ಟ-ಅಸಾಧ್ಯ.
ಚೆನ್ನಾಗಿ ವಿವರಿಸಿದ್ದಿರಾ... ಒಳ್ಳೇ ಕವನ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ... ಕವನ ಎಲ್ಲರ ಮನಸ್ಸಿನ ಕನ್ನಡಿಯಂತಿದೆ.
ಪ್ರತ್ಯುತ್ತರಅಳಿಸುಕೈಗೆಟುಕದ್ದನ್ನು ಬಯಸುವ ಹುಚ್ಚುಮನಸ್ಸಿನ ನಾಗಾಲೋಟದದುದ್ದಕ್ಕೂ ನಮ್ಮನ್ನು ಕರದೊಯ್ದಿರಿ..ಪಡೆದದ್ದು ಕಡಿಮೆಯಲ್ಲ....ಎನ್ನುವ ಸಾಂತ್ವನ ಮನಸಿಗೆ..ಅಲ್ಲವೇ..? ತೇಜಸ್ವಿನಿ..ಚನ್ನಾಗಿದೆ,
ಪ್ರತ್ಯುತ್ತರಅಳಿಸುನೀವು ಕೇಳಿದ್ದೂ ಸರಿ..ಅವರು ಕೊಟ್ಟದ್ದೂ ಸರಿ ! ಮನಸ್ಸಿನ ಬಯಕೆಯೇ ಹಾಗೇನೋ ..! ಕವನ ಚೆನ್ನಾಗಿದೆ.
ಪ್ರತ್ಯುತ್ತರಅಳಿಸುಚೆನ್ನಾಗಿ ಬರೆದಿದ್ದೀರಿ ! keep writing
ಪ್ರತ್ಯುತ್ತರಅಳಿಸುತೇಜಸ್ವಿನಿ madam,
ಪ್ರತ್ಯುತ್ತರಅಳಿಸುಕನಸಿಗೆ ಕಟ್ಟೆ ಹಾಕಲು ಬರದ ಕಷ್ಟದ ಬಗ್ಗೆ ಬರೆದಿದ್ದೀರಾ.... ಚೆನ್ನಾಗಿದೆ.......
tumba chennagide kavana, illadanna bittu illade irodanna bayasutteve alalve.
ಪ್ರತ್ಯುತ್ತರಅಳಿಸುತೇಜಸ್ವಿನಿ ಮೇಡಮ್..
ಪ್ರತ್ಯುತ್ತರಅಳಿಸುಕವನ ತುಂಬಾ ಇಷ್ಟವಾಯಿತು. ಮೇಲೆ ಕಾಣುವುದು ಎಷ್ಟೇ ಅಗಾಧವಾಗಿ ಸುಂದರವಾಗಿದ್ದರೂ, ಅದನ್ನು ಬಿಟ್ಟು, ಒಳಗಿನ ಸತ್ವವನ್ನೇ ಬೇಡುವ ಭಾವುಕ ಮನಸಿನ ಮಾತುಗಳು....
tumba adre tumba chennagide, idaralliruvudu ellavoo satya.. nechchide nimm manasannu.
ಪ್ರತ್ಯುತ್ತರಅಳಿಸುಮೇಡಂ
ಪ್ರತ್ಯುತ್ತರಅಳಿಸುಕವಿತೆ ಚೆನ್ನಾಗಿದೆ.
ಧನ್ಯವಾದಗಳು
ಕವಿತೆ ಚೆನ್ನಾಗಿದೆ
ಪ್ರತ್ಯುತ್ತರಅಳಿಸುನನಗೆ ಪೂರ್ತಿಯಾಗೇ ಅರ್ಥ ಆಯಿತು...
ಪ್ರತ್ಯುತ್ತರಅಳಿಸುನಲ್ಲ ಕೊಡಿಸಿದರಲ್ಲೇ ಖುಷಿ ಆಗಿರಲಿ ಹೇಳಿ ನಲ್ಲೆಗೆ... ಆಗ ಯಾರ ತಪ್ಪು ಇರುವುದಿಲ್ಲ :)
ಹೊಸ ಹೊಸ ರೀತಿಯ ಕವನಗಳನ್ನು ಕೊಡುತ್ತಿದ್ದೀರಿ...ಇನ್ನೂ ಇನ್ನೂ ಬರಲಿ ಇ೦ತಹ ಸು೦ದರ ಕವನಗಳು....
nice poem...
ಪ್ರತ್ಯುತ್ತರಅಳಿಸುತೇಜಸ್ವಿನಿಯವರೇ,
ಪ್ರತ್ಯುತ್ತರಅಳಿಸುತುಂಬಾ ಸುಂದರ ಕವನ,
ಕಂಡಿದ್ದು ಕಾಣದ್ದು ಎಲ್ಲವುಗಳ ಮಿಲನ ಸೊಗಸಾಗಿದೆ
ಬಹಳಷ್ಟು ಅರ್ಥ ಕವನದ ಒಳಗಿದೆ
ಇಷ್ಟವಾಯಿತು
ಕವನವನ್ನು ಮೆಚ್ಚಿಕೊಂಡು ಸ್ಪೂರ್ತಿ ತುಂಬುವ ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.
ಪ್ರತ್ಯುತ್ತರಅಳಿಸು@ ಶ್ಯಾಮಲಾ ಅವರೆ,
ನನ್ನ ಕವನದ ಒಳಾಶಯವನ್ನು ನೀವು ಬಹು ಚೆನ್ನಾಗಿ ಅರ್ಥೈಸಿಕೊಂಡಿರುವಿರೆ. ಹಾಗೆ ನೋಡಿದರೆ ಚಂದ್ರಶೇಖರ್ ಅವರು ಹೇಳಿದಂತೆ ಕವನ ಎನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು.
ಈ ಕವನವನ್ನು ಓದಿದಾಗ ಅಡಿಗರ "ಇರುವುದೆಲ್ಲವ ಬಿಟ್ಟು..." ಕವನದ ಸಾಲು ನೆನಪಾದರೂ ನನ್ನ ಆಶಯ ಇದಲ್ಲ.
ನೀವು ಹೇಳಿದಂತೆ.. ಇದು ಒಳಗಿನ ಸತ್ವವನ್ನು ಬೇಡುವ ಭಾವುಕ ಮನಸಿನ ಮಾತುಗಳು.
ಧನ್ಯವಾದಗಳು.
ತೇಜು ಅಕ್ಕ,
ಪ್ರತ್ಯುತ್ತರಅಳಿಸುಕವನ ಚೆನ್ನಾಗಿತ್ತು. :)
ಆದರೆ ನನಗೆ ಅನುಮಾನ.. ಗುಲಾಬಿಗೂ ಜಾಜಿಗೂ ನಂಟು ಹೇಗೆ..?
ಶಂಕರ್,
ಪ್ರತ್ಯುತ್ತರಅಳಿಸುಮೆಚ್ಚುಗೆಗೆ ಧನ್ಯವಾದಗಳು. ಇನ್ನು ಗುಲಾಬಿ, ಜಾಜಿಯ ನಡುವಿನ ಅಂತರ - ಸರಳವಾಗಿ ಹೇಳಬೇಕೆಂದರೆ, ಗುಲಾಬಿ ನೋಡಲು ಸುಂದರ ಆದರೆ ಅದರ ಪರಿಮಳ ಜಾಜಿಗೆ ಸಮನಾಗದು. ಗುಲಾಬಿ ಮುಗುಳ್ನಗುವಾದರೆ, ಜಾಜಿ ಹೂ ನಗೆಬುಗ್ಗೆ :)
ಪಡೆದದ್ದೇನೂ ಕಡಿಮೆಯದ್ದಲ್ಲ..
ಪ್ರತ್ಯುತ್ತರಅಳಿಸುಆದರೆ ಬಯಸಿದ್ದೂ ಕೈಗೆಟುಕದ್ದಲ್ಲ!
ತಪ್ಪು ನನ್ನದಲ್ಲ ನಲ್ಲ,
ಈ ನನ್ನ ಹುಚ್ಚು ಮನಸಿನದು....
ಈ ಸಾಲುಗಳು ಸಕತ್ ಇಷ್ಟ ಆಯ್ತು ತೇಜಕ್ಕ... :-)
ನಿಜ.... ಎಷ್ಟೋ ವಿಷಯಗಳು ನಮಗರಿವಿಲ್ಲದಂತೆ ನಮ್ಮ ಮನಸ್ಸಿಗೆ ಇಷ್ಟವಾಗಿಬಿದುತ್ತದೆ .....
ಅದು ಕೈಗೆ ಎಟುಕದಿದ್ದಾಗ "ತಪ್ಪು ಯಾರದ್ದು " ಅಂತ ನಮ್ಮನ್ನ ನಾವು ಕೇಳಿಕೊಂಡಾಗ ಹೊಳೆಯುವ ಉತ್ತರ " ತಪ್ಪು ನನ್ನದಲ್ಲ " ಅಂತಾನೆ ಅಲ್ಲವ??... :-)
Madam,
ಪ್ರತ್ಯುತ್ತರಅಳಿಸುhego yavado link mulak nimma blog bantuu... tumbaa chenagive saluGalu :)
ತುಂಬಾ ಚೆನ್ನಾಗಿದೆ ಕಾವ್ಯ!
ಪ್ರತ್ಯುತ್ತರಅಳಿಸು'ತೇಜಸ್ವಿನಿ ಹೆಗಡೆ' ಅವ್ರೆ..,
ಪ್ರತ್ಯುತ್ತರಅಳಿಸುಚೆನ್ನಾಗಿದೆ...
Blog is Updated: http:/manasinamane.blogspot.com
ತೇಜಸ್ವಿನಿ ಮೇಡಂ,
ಪ್ರತ್ಯುತ್ತರಅಳಿಸು"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಅನ್ನೋದು ಇದ್ದಕ್ಕೆ ಅನ್ಸುತ್ತೆ ಅಲ್ವ. ಕಾವ್ಯ ಝರಿ ಅವರ್ಣನೀಯ. ಸೊಗಸಾದ ಕವನ.
ಕವನ ತುಂಬಾ ಇಷ್ಟ ಆಯಿತು... :)
ಪ್ರತ್ಯುತ್ತರಅಳಿಸುನಿಮ್ಮವ,
ರಾಘು.
tumba chennagide...
ಪ್ರತ್ಯುತ್ತರಅಳಿಸು