ಗುರುವಾರ, ಡಿಸೆಂಬರ್ 16, 2010

"ಸಂಸ್ಕೃತ ಸಾಹಿತ್ಯ ಹಾಗೂ ಬಾಹ್ಮಣ ಪರಿಕಲ್ಪನೆ ಮತ್ತು ಆಧುನಿಕ ಚಿಂತಕರು"

ಮಂಗಳೂರಿನ ಕೆನರಾ ಪದವಿ(ಡಿಗ್ರಿ) ಕಾಲೇಜಿನಲ್ಲಿ ಇದೇ ತಿಂಗಳ ೧೯ ಹಾಗೂ ೨೦ರಂದು "ಅಂತರ್ ವಿಷಯ ಸಂಸ್ಕೃತಾಧ್ಯಯನ ಮತ್ತು ಸಂಶೋಧನ ಕೇಂದ್ರದಡಿಯಲ್ಲಿ"(Centre for Inter disciplinary Studies and Research in Sanskrit (CISRS)) ಹಾಗೂ ಸಂಸ್ಕೃತ ಶೋಧ ಸಂಸ್ಥಾನ, ಶಿರಸಿ ಇದರ ಸಹಯೋಗದೊಂದಿಗೆ ರಾಷ್ಟ್ರಮಟ್ಟದ ವಿಚಾರಗೋಷ್ಠಿಯು ನಡೆಯಲಿದೆ. 

Invitation
ಕೆನರಾ ಶೈಕ್ಷಣಿಕ ಸಮೂಹ ಸಂಸ್ಥೆಗಳ ಸಂಸ್ಥಾಪಕರಾಗಿದ್ದ ದಿವಂಗತ ಶ್ರೀ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ ಸ್ಮರಣಾರ್ಥವಾಗಿ ಕಳೆದ ಹದಿನೈದು ವರುಷಗಳಿಂದಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರಗೋಷ್ಠಿಗಳನ್ನು CISRS ನಡೆಸುತ್ತಾ ಬಂದಿದೆ. ಕೆನರಾ ಪದವಿ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ  ಮುಖ್ಯಸ್ಥರೂ ಆಗಿರುವ ಪ್ರೊಫೆಸರ್ ಡಾ.ಜಿ.ಎನ್.ಭಟ್ಟರು ಈ ಸಂಶೋಧನಾ ಕೇಂದ್ರದ ನಿರ್ದೇಶಕರು.

ಪ್ರತಿವರುಷ ಬೇರೆ ಬೇರೆ ಕಾಲೇಜುಗಳ, ವಿಶ್ವವಿದ್ಯಾನಿಲಯಗಳ, ನಿವೃತ್ತ/ವೃತ್ತಿ ನಿರತ ಹಿರಿಹ ಕಿರಿಯ ವಿದ್ವಾಂಸರು, ಆಯಾ ಕ್ಷೇತ್ರದಲ್ಲಿ ಪರಿಣಿತರಾದವರು ಸೂಚಿಸಿದ ವಿಷಯದ ಪ್ರತಿ ತಮ್ಮ ತಮ್ಮ ನಿಲುವನ್ನು ಮಂಡಿಸುತ್ತಾರೆ. ಅವರೆಲ್ಲರ ಲೇಖನ ಮಾಲೆಕೆಗಳನ್ನು ಸಂಪಾದಿಸಿ ಅದಕ್ಕೊಂದು ಸುಂದರ ಪುಸ್ತಕ ರೂಪವನ್ನು ಕೊಟ್ಟು ಮರುವರುಷದ ವಿಚಾರಗೋಷ್ಠಿಯಂದು ಬಿಡುಗಡೆ ಮಾಡಲಾಗುತ್ತದೆ. ಹೀಗೆ ಒಟ್ಟೂ ಹದಿನೈದು ಪುಸ್ತಕಗಳನ್ನು ಈವರೆಗೆ ಬಿಡುಗಡೆಮಾಡಲಾಗಿದ್ದು, ಎಲ್ಲವೂ ಚಿಂತನಶೀಲ, ಅಧ್ಯಯನಶೀಲ ಲೇಖನಗಳಾಗಿವೆ. ಆ ಪುಸ್ತಕಗಳ ಹೆಸರು ಹಾಗೂ ಅವು ಬಿಡುಗಡೆಗೊಂಡ ಇಸವಿಯ ವಿವರ ಈ ಕೆಳಗಿನಂತಿದೆ. 

* Peep in to the past (1995)

* ರಾಮಾಯಣ ಮತ್ತು ಪರಂಪರೆ (1996)

* Sanskrit : A Source of Science (1997)

* Reincarnation : Concept and Implication (1998)

* Relevance of Plants and Herbs and Materials used in the Rituals (1999)

* ವ್ಯಕ್ತಿತ್ವ ವಿಕಸನ : ಭಾರತೀಯ ದೃಷ್ಟಿ (2000)
     Personality Development : Indian View

* ಗುರು - ಶಿಷ್ಯ ಸಂಬಂಧ : ಭಾರತೀಯ ದೃಷ್ಟಿ (2001)
     The Teachers and the Taught : Indian View 

* Parent - Children Relationship : Indian View (2002)

* Temple and Its Culture (2003)

* Concept of Value : A Universal Perception (2004)

* Economics and Commerce
                          Ancient Concept & Modern Relevance (2006)

* Concept of Beauty in the light of Cosmetics and Perfumes (2007)

* A Discourse of on Bliss (2009)

* ಸನಾತನ ವಿವಾಹ ಸಂಸ್ಕಾರ (in Kannada)
  Concept of Marriage (in English)                      (2010)

ಈ ಮೇಲಿನ ಕೆಲವು ಪುಸ್ತಕಗಳು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯ ಲೇಖನಗಳನ್ನೂ ಒಳಗೊಂಡಿವೆ. 

ಈ ವರುಷದ ವಿಚಾರಗೋಷ್ಠಿ ರಾಷ್ಟ್ರಮಟ್ಟದಾಗಿದ್ದು, ಈ ವಿಚಾರಗೋಷ್ಠಿಯ ವಿಷಯ "The Concept of Brahmana in Sanskrit literature and modern thinkers view"ಎಂದಾಗಿದೆ. ಬರುವ ೧೯ ಹಾಗೂ ೨೦ರಂದು ಕೆನರಾ ಪದವಿ ಕಾಲೇಜಿನ ಆವರಣದಲ್ಲಿ ನಡೆಯಲಿದ್ದು, ದೇಶದ ನಾನಾ ವಿಶ್ವವಿದ್ಯಾಲಯಗಳಿಂದ, ಕಾಲೇಜುಗಳಿಂದ ಆಹ್ವಾನಿತರಾದ ವಿದ್ವಾಂಸರು ತಮ್ಮ ತಮ್ಮ ವಿಚಾರಧಾರೆಯನ್ನು ಮಂಡಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಳಿಗೆ ನನಗೆ ಮೈಲ್ ಮಾಡಬಹುದು.

-ತೇಜಸ್ವಿನಿ ಹೆಗಡೆ.