ಬುಧವಾರ, ಆಗಸ್ಟ್ 20, 2014

ಯಾಚನೆ

ವಾದಿಸಿ ವಾದಿಸಿ ಸೋತಿರುವೆ ಬಿಟ್ಟು ತೊಲಗೊಮ್ಮೆ
ಹೆಣವಾಗುವ ಮೊದಲು ಬದುಕ ಹಣೆಯಬೇಕಿದೆ.
ಅಳಿದುಳಿದಿಹ ಶಕ್ತಿಯನೂ ತಿಣು ತುಣುಕಿ ಹಿಂಡಿ ಹೀರಿ
ಅರೆಜೀವಿಯಾಗಿಸುವ ಮರುಳೇನು ನಿನಗೆ?!

ಯುದ್ಧ ಸಾರಿಲ್ಲ ನಾ, ಕೊಸರಿಲ್ಲ, ಕಸುವಿಲ್ಲ
ಬಗೆದರೂ ಹನಿ ನೀರು ಚಿಮ್ಮದಂಥ ಬರಡು ಒಡಲು.
ಕೊರೆವ ನಿನ್ನ ಕೋರೆ ಹಲ್ಲುಗಳ ಇಳಿಸಿ ಆಳ-ಅಗಲ ತೋಡುವಿಯೇಕೆ?
ಬರಿದೆ ನಿನ್ನಯ ಸಮಯ ವ್ಯರ್ಥ ಅಳಲು.

ದಿಕ್ಸೂಚಿಯಾಗು ನೀ, ಮುನ್ಸೂಚಿಯಾಗದಿರು
ಪಂಚೇಂದ್ರಿಯಗಳೇ ಸಾಕು ಇಹ ಲೋಕಕೆ.
ಕಾಲಕ್ಕೂ ಮುನ್ನ ಕಾಲನ್ನು ಎಳೆಯದಿರು, 
ನಿನ್ನದೇ ದೇಣಿಗೆ ಈ ನನ್ನ ಬದುಕು. 

-ತೇಜಸ್ವಿನಿ

ಕಾಮೆಂಟ್‌ಗಳಿಲ್ಲ: